ಗುರುವಾರ, ಮೇ 9, 2013

ಕೈ

ಕೈ ತೋರಿಸಿದಿರಿ
ಕೈ ಬೀಸಿದಿರಿ
ಕೈ ಕೊಟ್ಟಿರಿ (ಹಸ್ತ ಲಾಘವ )
ಕೈ ಮಾಡಿ ಕರೆದಿರಿ
ಕೈ ಮುಗಿದಿರಿ
ಕೈ ಗೆಲ್ಲಿಸಿ ಎಂದಿರಿ
ಕೈ

ಪ್ರಣಾಳಿಕೆಯ ಪ್ರಾಣವಾಗಿ


 

ಮಂಗಳವಾರ, ಮೇ 7, 2013


 

ಕವನ ಬರಿಯಯ್ಯ

ಕಿಸಿದವಳ ನಗು ನೋಡಿ
ಹಸಿದವಳ ಹೊಟ್ಟೆ ನೋಡಿ
ಕಾಡುವ ಭಿಕ್ಷುಕನಿಗೆ ನೀಡಿ
ಪ್ರಕೃತಿ ಮಾತೆಯ ಬೇಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ

ಮುತ್ತಿಕ್ಕಲು ದುಂಬಿ ಓಡಿ
ಮೆತ್ತಗಾಯ್ತು ಕನಸ ಮೋಡಿ
ಕಲ್ಪೆನೆಯ ಜೋತೆಯಾಡಿ
ಮನಸಿನಲ್ಲಿದುದ್ದನ್ನ ಮೆತ್ತಗೆ ಮಾಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ

ಹಸಿ ಅನುಭವಗಳ ಬಿಸಿ ಮಾಡಿ
ಆಸೆಯ ಆಗಸದಲಿ ತೇಲಾಡಿ
ಜೀವನ ಬಸ್ಸಿನಲ್ಲಿ ನೂಕಾಡಿ
ಆಡುವ ಮಕ್ಕಳ ಜೊತೆಗೂಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ !!!

ಅಯ್ಯ, ಸ್ನಿಗ್ದ ಪ್ರೀತಿಯಲಿ
ಮುಳುಗಿ
ಮುoದೆ ....... ಅದೇ
ಧ್ಯಾನದ  ಹಾದಿ ಕಣಯ್ಯಾ .


 

ಸೋಮವಾರ, ಮೇ 6, 2013

ಮನಸು ಮಲಗಿತು

ಆಹಾ.... ಕುಂದಾಪುರ

ಅಲ್ಲಿಗೆ ಹೋಗಬೇಕು ಸರ ಸರ
...
ಆಗುಂಬೆಯ ಸಂಜೆ ಸೂರ್ಯನ

ಕಣ್ಣಲ್ಲಿ ಕಟ್ಟಿಕೊಂಡು

ಹಾವಿನಂತೆ ಸುತ್ತಿಕೊಂಡು

ಕನಸ ಕ್ಯಾಮರ ಹೊತ್ತುಕೊಂಡು

ಸಾಗು... ಭಾವನೆಗಳ ಮೆತ್ತಿಕೊಂಡು



ಅವಸರಕ್ಕೆ ತುಂಡರಿಸಿದ ಕನ್ನಡ

ಹಲಸಿನ ಕೊಟ್ಟೆ ಕಡುಬು

ನೀರು ದೋಸೆ ಆಸೆ

ಮುಗಿಲು ಕಳಚಿ ಬೀಳುವ ಮಳೆ

ಬೆಳೆಯಬಹುದು ಬೆವರಿನಲ್ಲಿ ಬೆಳೆ



ಆನೆಗುಡ್ಡೆ ಗಣಪ

ಬಾರ್ಕೂರು ದೇವಿ

ಕೋಟೇಶ್ವರ ಕೋಟಿಲಿಂಗ

ಕುಂಭಾಸಿಯ ಹರಿಹರ

ಸಾಲಿಗ್ರಾಮದ ನರಸಿಂಹನ

ನಮಸ್ಕರಿಸಿ ಮುನ್ನೆಡೆ



ಕಡಲ ತಟದಲಿ

ರವೆಯಂತ ಮರಳು

ಮರಳ ಮನೆಯಲಿ

ಮಕ್ಕಳ ಸಂತೆ

ಅವರಿಗಿಲ್ಲ ನಾಳೆಯ ಚಿಂತೆ



ಅಲ್ಲಿ ಹರಿದಾಡುವ ಪ್ರೇಮಿಗಳು

ಮೀನು ಹಿಡಿಯುವ ಬೆಸ್ತರು

ಗೂಡು ಸೇರಲು ಓಡುವ ಏಡಿಗಳು

ಕೇಕೆ ಹಾಕುವ ನವಿಲುಗಳು

ಕಷ್ಟ ಸುಖಗಳ

ಶರಧಿಯ ಏರಿಳಿತಗಳು

ಮಿಂದ ಮನ

ದಡವನ್ನೆ ಸುತ್ತಿಕೊಂಡು

ಮುದ್ದಾಗಿ ಮಲಗಿತು




DºÁ.....PÀÄAzÁ¥ÀÄgÀ
C°èUÉ ºÉÆÃUÀ¨ÉÃPÀÄ ¸ÀgÀ¸ÀgÀ
DUÀÄA¨ÉAiÀÄ ¸ÀAeÉ ¸ÀÆAiÀÄð£À
PÀtÚ°è PÀnÖPÉÆAqÀÄ  
WÁnAiÀÄ°è ºÁ«£ÀAvÉ ¸ÀÄwÛPÉÆAqÀÄ
PÀ£À¸À PÁåªÀÄgÀ ºÉÆvÀÄÛ
ªÀÄ£À¸ÀÄ ªÀÄvÀÛUÉ ¸Àj¹

 CªÀ¸ÀgÀPÉ vÀÄAqÀj¹zÀ
PÀÄAzÁ¥ÀÄgÀzÀ PÀ£ÀßqÀ
ºÀ®¹£À PÉÆmÉÖ PÀqÀħÄ
¤ÃgÀÄ zÉÆÃ¸ÉAiÀÄ D¸É
ªÀÄÄV®Ä PÀ¼Àa ©¼ÀĪÀ ªÀļÉ
¨É¼ÉAiÀħºÀÄzÀÄ ¨ÉªÀj£À°è ¨É¼É

 D£ÉUÀÄqÉØ UÀt¥À
¨ÁPÀÆðgÀÄ zÉë
PÉÆÃmÉÖñÀégÀzÀ PÉÆÃn°AUÀ
PÀÄA¨sÁ¹AiÀÄ ºÀjºÀgÀ
¸Á°UÁæªÀÄzÀ £ÀgÀ¹AºÀ£À
£ÀªÀĸÀÌj¹

 PÀqÀ® vÀlz°
gÀªÉAiÀÄAvÀ ªÀÄgÀ¼ÀÄ
ªÀÄgÀ¼À ªÀÄ£ÉAiÀİ
DlªÁqÀĪÀ ªÀÄPÀ̼À ¸ÀAvÉ
CªÀjV®è AiÀiÁªÀÅzÉà aAvÉ

 C°è ¥ÉæÃ«ÄUÀ¼ÀÄ
«ÄãÀÄ »rAiÀÄĪÀ ¨É¸ÀÛgÀÄ
UÀÆqÀÄ ¸ÉÃgÀĪÀ KrUÀ¼ÀÄ
CPÀÌ ¥ÀPÀÌzÀ°£À PÉÃPÉ ºÁPÀĪÀ £À«®ÄUÀ¼ÀÄ
PÀµÀÖ ¸ÀÄRUÀ¼ÀAvÀ ±ÀgÀ¢üAiÀÄ Jj½vÀUÀ¼ÀÄ
 PÀqÀ®¯Éè «ÄAzÀ ªÀÄ£À¸ÀÄ
¥ÀæPÀÈw ZÁ¥ÉAiÀÄ°è ¸ÀÄwÛPÉÆAqÀÄ
ªÀÄ®VvÀÄ.

 

 

 

 

ಶನಿವಾರ, ಮೇ 4, 2013

ತೊಟ್ಟಿಲ ಮದ್ದು


ಭತ್ತದ ಅರಳು ಅಥವಾ ಹುಳ್ಳಿ ಕಾಳು ಹುರಿದಂಗೆ ಪಟ ಪಟನೆ ಮಾತನಾಡುವ ಚುರುಕಾದ ಮಕ್ಕಳನ್ನು ಕಂಡಾಗ "ನಿನ್ನ ಬಾಯಿಗೆ ಬಜೆ ಹಾಕ್ದೊರ್ ಯಾರು ಮಾರಾಯ ?"ಎನ್ನುತೇವೆ .
ಮಾತಿಗೂ ಬಜೆಗೂ ನಿಕಟ ಸಂಬಂಧವಿದೆ. ಸಂಸ್ಕೃತದಲ್ಲಿ ಬಜೆಗೆ ವಚ ಎನ್ನುವರು.
 ವಚನ(ಮಾತಿನ) ಶಕ್ತಿಯನ್ನು ಹೆಚ್ಚಿಸುವ ಗುಣವಿರುವುದರಿಂದ ಬಜೆಗೆ ವಚ ಎನ್ನುತಾರೆ. ಮಗುವಿನ ನಾಮಕರಣ ಸಂದರ್ಭದಲ್ಲಿ ಬಜೆ ಮತ್ತು ಬಂಗಾರವನ್ನು ತೇದು ಮಗುವಿಗೆ ಸೋದರಮಾವ ನೆಕ್ಕಿಸುವ ಸಂಪ್ರದಾಯವಿದೆ. ಸ್ವರಕ್ಕೆ ಹಿತವಾಗಿ ಮತ್ತು ಮಾತಿನ ಶಕ್ತಿಯನ್ನು ವರ್ಧಿಸುವದರಿಂದ "ವಾಕ್ ಸ್ವರಪ್ರದ" ವಾಗಿದೆ. ಪುರಾತನ ವೈದ್ಯಶಾಸ್ತ್ರ  ಬಜೆಯ ಸ್ವರೂಪ ಮತ್ತು ಕಾರ್ಯವನ್ನು ವರ್ಣಿಸಿದೆ. ಕಂದವು ಅರುಣ ಬಣ್ಣವಿರುವುದರಿಂದ ಅರುಣ ,ಸೂಕ್ಷ್ಮ ಬೇರುಗಳನ್ನು ಹೊಂದಿರುವುದರಿಂದ ಗೋಲೊಮಿ ,ಲೊಮಶಿ , ಕಂದವು ಗಣ್ಣುಗಳಿಂದ ಕೂಡಿರುವದರಿಂದ ಶತಪರ್ವಕ ,ದೇಹದ ಕೊಬ್ಬನ್ನು ಕರಗಿಸುವದರಿಂದ ಕರ್ಷಿಣಿ , ದುಷ್ಟ ಗ್ರಹಗಳನ್ನು ದೊರಮಾಡುವುದರಿಂದ ಭೂತನಾಶಿನಿ , ರೋಗಗಳನ್ನು ಗೆಲ್ಲುವುದರಿಂದ ವಿಜಯ ಮತ್ತು ಶುಭಕರವಾಗಿರುವುದರಿಂದ ಮಾಂಗಲ್ಯ ಎಂದು ಪ್ರಚಲಿತ. 

ಶುಕ್ರವಾರ, ಮೇ 3, 2013

ನಾ ಕಾಣೆ

 ಓಟಿಗಾಗಿ .....  
ಹಲವು ಆಣೆ ಪ್ರಮಾಣ
ಲಿಂಗ ಶಿವದಾರ ಜನಿವಾರದಾಣೆ
ತಿಮ್ಮಪ್ಪನ ಮೇಲೆ ಆಣೆ
ಅಪ್ಪ ಅಮ್ಮನಾಣೆ
ಮಕ್ಕಳು ಮೊಮ್ಮಕ್ಕಳಾಣೆ
ಹಾಲು ,ನೀರು
ನಾಗವಲ್ಲಿ ಮೇಲಾಣೆ

ಕುಡಿಕುಡಿದು
ಮತಗಟ್ಟೆ ಮರೆತು
ಆಣೆ ನಿಶೆಯಲಿ ಬೆರೆತು
ಒತ್ತಾಯ ಮಾಡಿದರೆ
ಯಾವ ಗುರುತಿಗೆ
ಯಾರಿಗೆ ಒತ್ತುತ್ತಾನೋ ?
ನಾ ಕಾಣೆ
ದೇವರ ಮೇಲಾಣೆ

ಡಾ .ನಾಗೇoದ್ರ ಮಲ್ಲಾಡಿಹಳ್ಳಿ












  

ಗುರುವಾರ, ಮೇ 2, 2013


ಮಲ್ಲಿಗೆ


ಯಾರು ನೆಟ್ಟರೋ ,ಬಿಟ್ಟರೋ
ಹುಲುಸಾಗಿ ಬೆಳೆದಿದೆ
ಬಲಿತು
ಬಾಹುಗಳ ಚಾಚಿ
ಆಲಿವಾಣದ ಮರ ತಬ್ಬಿ
ಎಲ್ಲರ ಕಣ್ಣು ಕುಕ್ಕುತಿದೆ
ಮಲ್ಲಿಗೆಯ ಬಳ್ಳಿ
ನೋಡಬೆಕೀಗ ಎಲ್ಲರ ಕಳಕಳಿ

ಹೂ ಮಾರುವ
ಪುಟ್ಟಿಯಲ್ಲಿ
ನನ್ನವಳ ತುರುಬಿನಲ್ಲಿ
ದೇವರ ನೆತ್ತಿಯಲ್ಲಿ
ಪೂಜಾರಿಯ ಪ್ರಸಾದದಲ್ಲಿ
ಮಧು ಚಂದ್ರದ ಮಂಚದಲ್ಲಿ

ಬಿಳಿ ತೊಗಲಿನ ಕೊರಳಲ್ಲಿ
ತೂಗುವ ತೊಟ್ಟಿಲಲ್ಲಿ
ಸನ್ಮಾನದ ಸಂತೆಯಲ್ಲಿ
ಪಂಚಭೂತಗಳ ಪಯಣದಲ್ಲಿ
ಮೂಗು ,ಮನಸಿನ ಮನೆಯಲ್ಲಿ
ಭಾವನೆಗಳ ಬಿಲಗಳಲಿ
ಕಣ್ ಬಿಡುತ್ತೆ ಪಿಳಿಪಿಳಿ

ದುಂಡು ಸೂಜಿ ಜಾಜಿ
ಮೈಸೂರು ಮಂಗಳೂರು
ಶಂಕರಪುರದ
ನನ್ನೂರ ನಿನ್ನೂರ
ಘಮ ಘಮ ಮಲ್ಲಿಗೆ
ಯಾರು ನೆಟ್ಟರೇನು ,ಬಿಟ್ಟರೇನು
ಕಾಲತೆಕ್ಕೆಯಲಿ ಮೈ ಮರೆಯುವಳು
ಮೆಲ್ಲಗೆ !
ಡಾ. ನಾಗೇoದ್ರ ಮಲ್ಲಾಡಿಹಳ್ಳಿ

ಮಲ್ಲಿಗೆ 


ಯಾರು ನೆಟ್ಟರೋ ,ಬಿಟ್ಟರೋ
ಹುಲುಸಾಗಿ ಬೆಳೆದಿದೆ
ಬಲಿತು
ಬಾಹುಗಳ ಚಾಚಿ
 ಆಲಿವಾಣದ ಮರ ತಬ್ಬಿ
ಎಲ್ಲರ ಕಣ್ಣು ಕುಕ್ಕುತಿದೆ
ಮಲ್ಲಿಗೆಯ ಬಳ್ಳಿ
ನೋಡಬೆಕೀಗ ಎಲ್ಲರ ಕಳಕಳಿ

ಹೂ ಮಾರುವಬಿಲಗಳಲಿ ವಳ
ಪುಟ್ಟಿಯಲ್ಲಿ
ನನ್ನವಳ ತುರುಬಿನಲ್ಲಿ
ದೇವರ ನೆತ್ತಿಯಲ್ಲಿ
ಪೂಜಾರಿಯ ಪ್ರಸಾದದಲ್ಲಿ 
ಮಧು ಚಂದ್ರದ ಮಂಚದಲ್ಲಿ
ಬಿಳಿ ತೊಗಲಿನ ಕೊರಳಲ್ಲಿ
ತೂಗುವ ತೊಟ್ಟಿಲಲ್ಲಿ
ಸನ್ಮಾನದ ಸಂತೆಯಲ್ಲಿ
ಪಂಚಭೂತಗಳ ಪಯಣದಲ್ಲಿ
ಮೂಗು ,ಮನಸಿನ ಮನೆಯಲ್ಲಿ
ಭಾವನೆಗಳ  ಬಿಲಗಳಲಿ
ಕಣ್ ಬಿಡುತ್ತೆ  ಪಿಳಿಪಿಳಿ

ದುಂಡು ಸೂಜಿ ಜಾಜಿ
ಮೈಸೂರು ಮಂಗಳೂರು
ಶಂಕರಪುರದ
ನನ್ನೂರ ನಿನ್ನೂರ
ಘಮ ಘಮ ಮಲ್ಲಿಗೆ
ಯಾರು ನೆಟ್ಟರೇನು ,ಬಿಟ್ಟರೇನು
ಕಾಲತೆಕ್ಕೆಯಲಿ ಮೈ ಮರೆಯುವಳು
ಮೆಲ್ಲಗೆ !

ಡಾ. ನಾಗೇoದ್ರ ಮಲ್ಲಾಡಿಹಳ್ಳಿ





 

ಬುಧವಾರ, ಮೇ 1, 2013

ನೀವು  ದಪ್ಪವಾಗಬೇಕೇ?

 
ಸಣಕಲು ಸುಮಳ ಮದುವೆ ಫಿಕ್ಸ್ ಆಯ್ತು . ಮೈ,ಕೈ ತುಂಬಿಕೊಂಡು ಸುಂದರವಾಗಿ ಕಾಣುವಾಸೆ ಚಿಗುರೊಡೆಯಿತು . ಕುಳಿ ಬಿದ್ದ ಕೆನ್ನೆಗಳಿಗೆ ಕೊಬ್ಬು ತುಂಬಿಕೊಳ್ಳುವ ತವಕ ಹೆಚ್ಚಾಯ್ತು . ಹೀಗೆ ಕೆಲವು ಸಂದರ್ಭಗಳು ,ಹಲವರ ಟೀಕೆಗಳು ಸಣ್ಣಗಿದ್ದವರನ್ನು ದಪ್ಪಗಾಗಲು ಪ್ರೇರೆಪಿಸುತ್ತವೆ . 
 
ನೀವು ತೆಳ್ಳಗಿದ್ದೀರಾ ? ಸದೃಢ ಮೈಕಟ್ಟನ್ನು ಹೊಂದಿ ,ದೇಹದ ತೂಕ ಹೆಚ್ಚಿಸಿಕೊಳ್ಳಬೇಕೆ? ದಪ್ಪಗಾಗಲು ಗ್ಯಾರಂಟಿ ಔಷಧಿ ಕೊಡುತೇವೆ . ಎನ್ನುವ ವಿವಿಧ ಮಾಧ್ಯಮಗಳ ಜಾಹೀರಾತುಗಳು ತೆಳ್ಳಗಿದವರನ್ನ ತಬ್ಬಿಕೊಳ್ಳಲು
ತುದಿಗಾಲಲ್ಲಿವೆ. ಜನರು ಸಹ ಅಕ್ಕಿ,ರಾಗಿಯಂತೆ ಔಷಧಿ ಕೊಳ್ಳಲು ಪ್ರಾರಂಭಿಸಿದ್ದಾರೆ. ತೆಳ್ಳಗಾಗಲು ,ಬೆಳ್ಳಗಾಗಲು ,ದಪ್ಪಗಾಗಲು 
ಬೋಳುತಲೆ ಚಿಗುರೊಡೆಯಲು ,ಬುದ್ದಿವಂತರಾಗಲು ತಾವೇ ಔಷಧಿ ಖರೀದಿಸುವುದು ಸಮಂಜಸವಲ್ಲ . 
 
ಸಣ್ಣಗಿದ್ದವರು ದಪ್ಪ ,ದಪ್ಪಗಿದ್ದವರು ಸಣ್ಣಗಾಗುವ ಟ್ರೆಂಡ್ ಹೊಸದೇನೂ ಅಲ್ಲ. ಸಾವಿರಾರು ವರ್ಷಗಳ ಹಿಂದೆಯೇ ದೇಹದ 
ಆಕೃತಿಯ ಆಧಾರದ ಮೇಲೆ ಎರಡು ವಿಧ ಚಿಕಿತ್ಸೆಗಳನ್ನು ತಿಳಿಸಿದ್ದಾರೆ. ಆಯುರ್ವೇದದ 'ಅಷ್ಟಾಂಗ ಹೃದಯದಲ್ಲಿ' ತೆಳ್ಳಗಿದ್ದವರನ್ನು 
ದಪ್ಪ ಮಾಡುವ ಬೃಂಹಣ (ಸಂತರ್ಪಣ ) ಮತ್ತು  ದಪ್ಪಗಿದ್ದವರನ್ನು ತೆಳ್ಳಗೆ ಮಾಡುವ ಲಂಘನ (ಅಪತರ್ಪಣ )ವಿಧಾನಗಳನ್ನು 
ವಿವರಿಸಿದ್ದಾರೆ . 

ಬೃಂಹಣ ಚಿಕಿತ್ಸೆ 

ತೆಳ್ಳಗಿದವರನ್ನು ದಪ್ಪಮಾಡುವುದೇ ಬೃಂಹಣವಾಗಿದೆ . ಶಾಸ್ತ್ರದಲ್ಲಿ ಮನೋದೈಹಿಕ ತಳಹದಿಯ ಮೇಲೆ ರೂಪಿಸಿರುವ ಈ ಚಿಕಿತ್ಸೆ ಆಹಾರ, ಔಷಧಿಗಳ  ಮಿಶ್ರಣವಾಗಿದೆ. 

ಯಾರಿಗೆ ಬೇಕು ಬೃಂಹಣ 

  • ಅತಿಮದ್ಯಸೇವನೆ ,ಅತಿಯಾದ ಲೈಂಗಿಕ ಕ್ರಿಯೆ ,ಭಾರವಾದ ವಸ್ತುಗಳನ್ನು ಹೊರುವವರು (ಕೊಲಿ ಕೆಲಸ ಮಾಡುವವರು ),ಕಷ್ಟಪಡುವವರು ,ಅತಿ ದೂರ ಪ್ರಯಾಣ ಮಾಡುವವರು ,ದುರ್ಬಲರು ,ವಾತದೋಷದಿಂದ ಬಳಲುತಿರುವವರು ಬೃಂಹಣ ಚಿಕಿತ್ಸೆ ತೆಗೆದುಕೊಳ್ಳಬೇಕು. 
  • ಆರೋಗ್ಯವಂತರು ಸಹ ಆರೋಗ್ಯ ಕಾಪಾಡಿಕೊಳ್ಳಲು ಬೃಂಹಣ ಉತ್ತಮವಾಗಿದೆ. 
  • ಮಕ್ಕಳು ,ವಯಸ್ಸಾದವರು ,ಗರ್ಭಿಣಿ ಮತ್ತು ಸೂತಿಕ ಅವಸ್ಥೆಗಳಲ್ಲಿ ಉಪಯೋಗಿಸಲೇ ಬೇಕು. 
  • ಚಿಂತೆ ಮಾಡುವವರು
  • ಗ್ರೀಷ್ಮ ಋತುವಿನಲ್ಲಿ  ಈ ಎಲ್ಲಾ ಸಂದರ್ಭಗಳಲ್ಲಿ ಶಕ್ತಿ ವರ್ಧನೆಗಾಗಿ ,ಮನೋದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಬೃಂಹಣ ಚಿಕಿತ್ಸೆ ಸಹಕಾರಿಯಾಗಿದೆ.

  ಬೃಂಹಣೀಯ ಆಹಾರ

ಸಿಹಿ ಮತ್ತು ಜಿಡ್ಡಿನಿಂದ ಕೂಡಿದ ಯಾವುದೇ ಪದಾರ್ಥ ಬೃಂಹಣವಾಗಿದೆ. ಉದಾ:ಮಾಂಸ ,ಹಾಲು,ತುಪ್ಪ ಮುಂತಾದ ಸಿಹಿ ಮತ್ತು ಜಿಡ್ಡಿನ ಆಹಾರ. ಮಾಂಸವು ಉತ್ತಮ ಬೃಂಹಣೀಯ. ಮಾಂಸಕ್ಕೆ ಸಮಾನವಾದ ಬೃಂಹಣ ಆಹಾರ ಮತ್ತೊಂದಿಲ್ಲ. ಅದಕ್ಕೆ ಗ್ರಂಥಗಲ್ಲಿ  "ನಹಿ ಮಾಂಸ ಸಮo " ಎಂದಿದ್ದಾರೆ . ಇಂದು ನಾವು ಸೇವಿಸುತ್ತಿರುವ ಆಹಾರ ಕಳಪೆ ಮತ್ತು ಕಲಬೆರಕೆ. 
ಶುದ್ದವಾದ , ಸ್ವಾಭಾವಿಕವಾದ ,ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕು. 
 
ಮನೋ ಬೃಂಹಣ: ನೀವು ದಪ್ಪವಾಗಬೇಕೆ ? ಮೊದಲು ನೆಮ್ಮದಿಯಿಂದಿರಿ . 
 
ಅಚಿಂತೆ : ಚಿಂತೆ ಹಲವು ರೋಗಗಳಿಗೆ ಮೂಲ. "ಚಿಂತೆ ಇಲ್ಲದವನಿಗೆ ಸಂತೆಗೆ ನಿದ್ದೆ ಬಂತಂತೆ"  ಚಿಂತೆಯು ಮಾಡುವದರಿಂದ ಸಣ್ಣಗಾಗುತ್ತಾರೆ. ಆದುದರಿಂದ ಚಿಂತೆ ಮಾಡದಿರುವುದು ಒಳ್ಳೆಯದು. 
ಹರ್ಷಣ : ಹರ್ಷಣವೆಂದರೆ ಸಂತೋಷ. ಸಂತೋಷವೆ ಆರೋಗ್ಯ. ದುಃಖವೆ ರೋಗ . ಸದಾ ಸಂತೋಷದಿಂದದಿರಬೇಕು. 
ನಿವೃತಿ :ತೃಪ್ತಿಯೇ ನಿವೃತಿ . ಇದ್ದುದರಲ್ಲೇ ತೃಪ್ತಿಕರ ಜೀವನ ನಡೆಸಬೇಕು. 
ಸಪ್ನ : ನಿದ್ರೆ ಮನುಷ್ಯನಿಗೆ ಚೈತನ್ಯ ಮತ್ತು ಆರೋಗ್ಯ ನೀಡುವುದು. ಸುಖ ನಿದ್ರೆ ಮನುಷ್ಯನನ್ನು ದಪ್ಪ ಮಾಡುವದು.
ಅಭ್ಯಂಗ : ಎಣ್ಣೆಯನ್ನು ನಿಯಮನುಸಾರವಾಗಿ ಮೈಗೆ ತಿಕ್ಕುವುದಕ್ಕೆ ಅಭ್ಯಂಗ ಏನ್ನುವರು . ಈ ಕ್ರಿಯೆ ವಾತದೋಷವನ್ನು ಕಡಿಮೆ ಮಾಡುವದಲ್ಲದೆ ಶರೀರಕ್ಕೆ ಬಲ ನೀಡುವದು.
ಸ್ನಾನ :ಸ್ನಾನ ಮಾಡುವದರಿಂದ ಹಸಿವು ಹೆಚ್ಹುವದು. ಶರೀರದ ಮಲ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ನೀಡುವದು.

ಸಣ್ಣಗಿರುವವರನ್ನು ದಪ್ಪ ಮಾಡಲು ಕೇವಲ ಒಂದು ಔಷಧಿ ಸಾಕೆ? ಸ್ವಯಂ ವೈದ್ಯರಾಗಬೇಡಿ ಜೋಕೆ. ದಪ್ಪ ಮಾಡುವ ಚಿಕಿತ್ಸೆ
ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿದೆ. ರೋಗಿಯ ಮನೋದೈಹಿಕ ಸ್ಥಿತಿಯನ್ನು ಅರಿತು, ಉತ್ತಮ ಆಹಾರ ,ವಿಹಾರ ಮತ್ತು ಔಷಧಿಗಳನ್ನು ಪ್ರಯೋಗಿಸಿದರೆ ಸಣಕಲು, ಬಡಕಲು ದೇಹದವರು ದಪ್ಪವಾಗಿ ಸುಂದರವಾಗಿ ಕಾಣಬಹುದು.

ಡಾ. ಎಂ. ನಾಗೇoದ್ರ ಮಲ್ಲಾಡಿಹಳ್ಳಿ
 
 
 
 
 
  •  
ಅಭ್ಯಂಗ : ಎಣ್ಣೆಯನ್ನು ನಿಯಮನುಸಾರವಾಗಿ ಮೈಗೆ ತಿಕ್ಕುವುದಕ್ಕೆ ಅಭ್ಯಂಗ ಏನ್ನುವರು . ಈ ಕ್ರಿಯೆ ವಾತದೋಷವನ್ನು ಕಡಿಮೆ ಮಾಡುವದಲ್ಲದೆ ಶರೀರಕ್ಕೆ ಬಲ ನೀಡುವದು.
ಸ್ನಾನ :ಸ್ನಾನ ಮಾಡುವದರಿಂದ ಹಸಿವು ಹೆಚ್ಹುವದು. ಶರೀರದ ಮಲ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ನೀಡುವದು.

ಸಣ್ಣಗಿರುವವರನ್ನು ದಪ್ಪ ಮಾಡಲು ಕೇವಲ ಒಂದು ಔಷಧಿ ಸಾಕೆ? ಸ್ವಯಂ ವೈದ್ಯರಾಗಬೇಡಿ ಜೋಕೆ. ದಪ್ಪ ಮಾಡುವ ಚಿಕಿತ್ಸೆ
ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿದೆ. ರೋಗಿಯ ಮನೋದೈಹಿಕ ಸ್ಥಿತಿಯನ್ನು ಅರಿತು, ಉತ್ತಮ ಆಹಾರ ,ವಿಹಾರ ಮತ್ತು ಔಷಧಿಗಳನ್ನು ಪ್ರಯೋಗಿಸಿದರೆ ಸಣಕಲು, ಬಡಕಲು ದೇಹದವರು ದಪ್ಪವಾಗಿ ಸುಂದರವಾಗಿ ಕಾಣಬಹುದು.

                                                                                                      ಡಾ. ಎಂ. ನಾಗೇoದ್ರ ಮಲ್ಲಾಡಿಹಳ್ಳಿ