ಮಂಗಳವಾರ, ಮೇ 7, 2013


 

ಕವನ ಬರಿಯಯ್ಯ

ಕಿಸಿದವಳ ನಗು ನೋಡಿ
ಹಸಿದವಳ ಹೊಟ್ಟೆ ನೋಡಿ
ಕಾಡುವ ಭಿಕ್ಷುಕನಿಗೆ ನೀಡಿ
ಪ್ರಕೃತಿ ಮಾತೆಯ ಬೇಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ

ಮುತ್ತಿಕ್ಕಲು ದುಂಬಿ ಓಡಿ
ಮೆತ್ತಗಾಯ್ತು ಕನಸ ಮೋಡಿ
ಕಲ್ಪೆನೆಯ ಜೋತೆಯಾಡಿ
ಮನಸಿನಲ್ಲಿದುದ್ದನ್ನ ಮೆತ್ತಗೆ ಮಾಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ

ಹಸಿ ಅನುಭವಗಳ ಬಿಸಿ ಮಾಡಿ
ಆಸೆಯ ಆಗಸದಲಿ ತೇಲಾಡಿ
ಜೀವನ ಬಸ್ಸಿನಲ್ಲಿ ನೂಕಾಡಿ
ಆಡುವ ಮಕ್ಕಳ ಜೊತೆಗೂಡಿ

ಕವನ ಬರಿಯಯ್ಯ
ಬರೆಯುತಾ ಕೂತರೆ
ತಾನೆ ಎದ್ದು ಓಡುವುದಯ್ಯ !!!

ಅಯ್ಯ, ಸ್ನಿಗ್ದ ಪ್ರೀತಿಯಲಿ
ಮುಳುಗಿ
ಮುoದೆ ....... ಅದೇ
ಧ್ಯಾನದ  ಹಾದಿ ಕಣಯ್ಯಾ .


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ